Slide
Slide
Slide
previous arrow
next arrow

ವಿಎಸ್‌ಎಸ್ ನೂತನ ಅಧ್ಯಕ್ಷರಾಗಿ ರಾಜಗೋಪಾಲ ಅಡಿ ಪುನರಾಯ್ಕೆ

300x250 AD

ಗೋಕರ್ಣ: ಇಲ್ಲಿಯ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಸತತ 2ನೆ ಬಾರಿಗೆ ರಾಜಗೋಪಾಲ ಮಹಾದೇವ ಅಡಿ, ಉಪಾಧ್ಯಕ್ಷರಾಗಿ ತೇಜಸ್ವಿ ಪರಮೇಶ್ವರ ನಾಯ್ಕ ಬೇಲೆಕಾನ ಇವರು ಅವಿರೋಧವಾಗಿ ಆಯ್ಕೆಯಾದರು.

ಅಧ್ಯಕ್ಷ ನಾಮಪತ್ರ ಹುದ್ದೆಗೆ ನಾಮಪತ್ರ ಸಲ್ಲಿಸಿದ ರಾಜಗೋಪಾಲ ಅಡಿ ಅವರನ್ನು ಚಿತ್ರಾ ಸುಕ್ರು ಗೌಡ ಸೂಚಿಸಿದರೆ, ರಮಾ ಕೃಷ್ಣ ಆಚಾರಿ ಅನುಮೋದಿಸಿದರು. ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ತೇಜಸ್ವಿ ನಾಯ್ಕ ಹೆಸರನ್ನು ಮಂಗಲಾ ಮಂಜುನಾಥ ಮುಕ್ರಿ ಸೂಚಿಸಿದರೆ, ತಿಮ್ಮಣ್ಣ ನಾಯಕ ಅನುಮೋದಿಸಿದರು. ನಾಗರಾಜ ಗೌಡ, ಸುಬ್ಬಿ ಗೌಡ, ಮತ್ತು ಗಣಪಯ್ಯ ಉಪಾಧ್ಯಾಯ ಮುಂತಾದವರು ಉಪಸ್ಥಿತರಿದ್ದು ಆಯ್ಕೆಯಲ್ಲಿ ಸಹಕರಿಸಿದರು. ಚುನಾವಣಾ ಅಧಿಕಾರಿಯಾಗಿ ಶಾರದಾ ಎನ್. ಕವರಿ ಚುನಾವಣಾ ಪ್ರಕ್ರಿಯೆಯನ್ನು ನೆರವೇರಿಸಿಕೊಟ್ಟರು.

300x250 AD
Share This
300x250 AD
300x250 AD
300x250 AD
Back to top